ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ಎಕ್ಸಲೆಂಟ್ ಶಾಲೆಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ:ಇಲ್ಲಿನ ಮಾರೂರಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜರಗಿದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ. ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳೆರಡೂ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ವಿಜೇತ ವಿದ್ಯಾರ್ಥಿಗಳು ಪ್ರೌಢ ವಿಭಾಗದಲ್ಲಿ ಕನ್ನಡ ಭಾಷಣ- ಸಾನಿಧ್ಯರಾವ್ 9ನೇ ಹಿಂದಿ ಭಾಷಣ-ಆಲ್ಸೀಯಾ-10ನೇ ರಸಪ್ರಶ್ನೆ- ವಿನಯ್ ಶಂಕರ್ ಮತ್ತು ಪ್ರತೀಶ್ ಗೌಡ 10ನೇ, ಮಿಮಿಕ್ರಿ- ಸುಚಿತ್ ಶೆಟ್ಟಿ 9ನೇ, ಸಂಸ್ಕçತ ಧಾರ್ಮಿಕ ಪಠಣ –ವೀಕ್ಷಾ ನಾಯಕ್-8ನೇಇಂಗ್ಲೀಷ್ ಭಾಷಣ- ಸುಧಾಶ್ರೀ 9ನೇ ಸಂಸ್ಕ್ರತ ಭಾಷಣ- ಆದಿತ್ಯ ಪುಣಿಚಿತ್ತಾಯ-10ನೇ,ಜನಪದ ಗೀತೆ –ಮೌಲ್ಯ ವೈ ಆರ್ ಜೈನ್ 10ನೇ, ಚರ್ಚಾ ಸ್ಪರ್ಧೆ- ದೀಕ್ಷಾ-ಪ್ರಥಮ 9ನೇ ಪ್ರಾಥಮಿಕ ವಿಭಾಗ, ಧಾರ್ಮಿಕ ಪಠಣ-ಪ್ರಣವ್-6ನೇ, ಲಘು ಸಂಗೀತ –ಆಯುಶ್-6ನೇ, ಅಭಿನಯ ಗೀತೆ- ಧನ್ವಿತಾ-7ನೇ, ಮಿಮಿಕ್ರಿ- ತ್ರಿಶೂಲ್ ಹೆಗ್ಡೆ-7ನೇ ವಿಜೇತಗೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Click here to View All