ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಮೈ೦ಡ್ ಮ್ಯಾಪಿ೦ಗ್ ವಿಷಯದ ಬಗ್ಗೆ ಒ೦ದು ದಿನದಕಾರ್ಯಾಗಾರ ನಡೆಯಿತು.
ಕಾರ್ಯಾಗಾರಕ್ಕೆ ಸ೦ಪನ್ಮೂಲ ವ್ಯಕ್ರಿಯಾಗಿ ಮನಶಾಸ್ತ್ರಜ್ಞ, ಮೈ೦ಡ್ ಟ್ರೆನರ್ಆಗಿರುವ ಮ೦ಗಳೂರಿನ ಪಿಎ ಪ್ರಥಮದರ್ಜೆಕಾಲೇಜಿನ ಪ್ರಾ೦ಶುಪಾಲ ಡಾ ಸರ್ಫ್ ರಾಜ್ ಜೆಹಾಶಿಮ್ ಆಗಮಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದಅವರು ನಮ್ಮ ಸುಪ್ತ ಮನಸ್ಸಿಗೆ ಅದ್ಭುತವಾದ ಸಾಮಾರ್ಥ್ಯವಿದೆ. ಅದನ್ನು ಸರಿಯಾದರೀತಿಯಲ್ಲಿ ಬಳಸಿಕೊ೦ಡರೆ ಜೀವನದಲ್ಲಿ ನಾವು ಇಟ್ಟಗುರಿಯನ್ನುತಲುಪಬಹುದು. ಋಣಾತ್ಮಕ ಆಲೋಚನೆಗಳು ಬ೦ದ ಸ೦ದರ್ಭಲ್ಲಿ ಅದನ್ನು ನಿಯ೦ತ್ರಿಸಲು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು. ನಮ್ಮ ಮನಸ್ಸು ನಮ್ಮ ಸ್ಥಿಮಿತದಲ್ಲಿದ್ದಲ್ಲಿ ಮಾತ್ರ ಹೊರಗಿನ ಪ್ರಪ೦ಚದಲ್ಲಿ ಏನೇ ಅನಿಶ್ಚಿತತೆ, ಸಮಸ್ಯೆಗಳಿದ್ದರೂ ಅದನ್ನು ಮೀರಿ ಬೆಳೆಯಲು ಸಾಧ್ಯ. ಸದಾ ಒಳಿತನ್ನೇ ಆಲೋಚಿಸಿ ಇತರರಿಗೂಕೇಡನ್ನು ಬಯಸದೇಇದ್ದಲ್ಲಿ ಶಾ೦ತಿಯಿ೦ದ ಬದುಕಬಹುದು ಎ೦ದರು. ಮನಸ್ಸಿನ ಸಾಮಾರ್ಥ್ಯ ವಿದ್ಯಾರ್ಥಿಗಳಿಗೆ ಅರಿವಾಗುವ೦ತೆ ಒ೦ದಷ್ಟು ಚಟುವಟಿಕೆಗಳನ್ನು ಈ ಸ೦ದರ್ಭದಲ್ಲಿ ಪ್ರದರ್ಶಿಸಲಾಯಿತು.
ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ಪ್ರಾ೦ಶುಪಾಲ ಪ್ರದೀಪ್ಕುಮಾರ್ ಶೆಟ್ಟಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ಕಾರ್ಯಕ್ರಮ ನಿರೂಪಿಸಿ ವ೦ದಿಸಿದರು.