ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ”ಸರ್ವ ಧರ್ಮ ಅರಿವು” ಕಾರ್ಯಕ್ರಮವು ಜರುಗಿತು. ಮೂಡುಬಿದಿರೆಯ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಹಿಂದೂ ಧರ್ಮದ ಬಗ್ಗೆ ಪುತ್ತಿಗೆ ಬಾಲಕಷ್ಣಭಟ್, ಕ್ರೈಸ್ತ ಧರ್ಮದ ಬಗ್ಗೆ ವಂ| ಗುರು| ಸುನಿಲ್ ಜಾರ್ಜ್ ಡಿ’ಸೋಜಾ , ಇಸ್ಲಾಂ ಧರ್ಮದ ಬಗ್ಗೆ ಶ್ರೀಮತಿ ರೆಹನಾ ಬೇಗಂ ಉಪನ್ಯಾಸ ನೀಡಿದರು.